General knowledge question paper -02-02-2025

13

Your test is started

Answer will be submited automatically


General knowledge question paper -02-02-2025

General knowledge question paper 01

ಸೂಚನೆ :-ಒಮ್ಮೆ ಹಣವನ್ನು ಪಾವತಿಸಿ ಪರೀಕ್ಷೆ ಆರಂಭಿಸಿದರೆ ಸಂಪೂರ್ಣ ಮುಗಿಸದೆ ಹಿಂದಿರುಗುವಂತಿಲ್ಲ, ಒಂದು ವೇಳೆ ಹಣ ಪಾವತಿಸಿ ಪರೀಕ್ಷೆ ಅಟೆಂಡ್ ಮಾಡದೆ ಸ್ವಲ್ಪ ಸಮಯದ ನಂತರ ಪ್ರಯತ್ನಿಸಿದರೆ ಮತ್ತೆ ಹಣ ಪೇ ಮಾಡಬೇಕಾಗುತ್ತದೆ.
ಪ್ರಶ್ನೆ ಪತ್ರಿಕೆಯ ಪ್ರತಿಯನ್ನು ನಿಮ್ಮ ಇಮೇಲ್ ಐಡಿಗೆ ಕಳುಹಿಸಲಾಗುತ್ತದೆ

The number of attempts remaining is 50

Please Fill this information to Attend Test

1 / 100

1. ಭಾರತದ ಸುಪ್ರೀಂ ಕೋರ್ಟ್‌ಗೆ ಸಂಬಂಧಿಸಿದಂತೆ

a) 2 Supreme court of judicature at Fort william ಎಂದು 1773 ರ ರೆಗ್ಯುಲೇಟಿಂಗ್ ಕಾಯಿದೆ ಅಡಿ 22 ಅಕ್ಟೋಬರ್ 1774 ರಲ್ಲಿ ಸ್ಥಾಪನೆಯಾಯಿತು.

ಬಿ) ಭಾರತದ ಸಂವಿಧಾನವು ಜಾರಿಗೆ ಬರುವುದರೊಂದಿಗೆ ಭಾರತದ ಸವೋಚ್ಛನ್ಯಾಯಾಲಯ ಅಸ್ತಿತ್ವಕ್ಕೆ ಬಂದಿತು. ಮತ್ತು ಮೊದಲ ಸಿ. ಜೆ.

ಐ ಆಗಿ ಹರಿಲಾಲ್ ಕಾನಿಯಾ ಆದರು

ಸಿ) ಸಂವಿಧಾನವು ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕ ಗೊಳ್ಳಲು ಕನಿಷ್ಠ ವಯಸ್ಸನ್ನು ನಿಗದಿ ಪಡಿಸಿಲ್ಲ.

ಡಿ) ಕಾನೂನಿನ ಮೂಲಭೂತ ಪ್ರಶ್ನೆಗಳ ವಿಷಯಗಳಿದ್ದಾಗ ನ್ಯಾಯಾಧೀಶರ ಸಂಖ್ಯೆ 2/3 ಜನರಿದ್ದರೆ ಅದನ್ನು ವಿಭಾಗೀಯ ಪೀಠಕ್ಕೆ ಅದಕ್ಕಿಂತ ಹೆಚ್ಚಿದ್ದರೆ ಸಾಂವಿಧಾನಿಕ ಪೀಠ ಎಂದು ಕರೆಯುತ್ತಾರೆ.

ಇ) ಕೋರಂ ಕೊರತೆ ಇದ್ದಾಗ ‘ಅಡ್ ಹುಕ್’ ನ್ಯಾಯಾಧೀಶರನ್ನು ಭಾರತದ ಮುಖ್ಯನ್ಯಾಯಾಧೀಶರು ನೇಮಕ ಮಾಡುತ್ತಾರೆ.

ಸರಿಯಲ್ಲದ ಆಯ್ಕೆ ಆರಿಸಿ :

 

2 / 100

2. ಸರಿಯಾದ ಹೇಳಿಕೆ ಗುರುತಿಸಿ

1) ವೇಸರ ಶೈಲಿಯಲ್ಲಿ ವಾಸ್ತುಶಿಲ್ಪವನ್ನು ಮೊದಲು ಆರಂಭಿಸಿದ್ದು ಬಾದಾಮಿ ಚಾಲುಕ್ಯರು

2) ವೇಸರ ಶೈಲಿಯಲ್ಲಿ ನಾಗರಶೈಲಿಯ ಕೆಲವು ಲಕ್ಷಣಗಳಿವೆ.

3) ವೇಸರ ಶೈಲಿಯಲ್ಲಿ ದ್ರಾವಿಡಶೈಲಿಯ ಕೆಲವು ಲಕ್ಷಣಗಳಿವೆ

ಸರಿಯಾದ ಆಯ್ಕೆಗಳು:-

3 / 100

3. ಕೆಳಗಿನ ಹೇಳಿಕೆಗಳನ್ನು ಗಮನಿಸಿ. ಅಯಸ್ಕಾಂತಕ್ಕೆ ಸಂಬಂಧಿಸಿದಂತೆ ಸರಿಯಾದುದನ್ನು ಆಯ್ಕೆ ಮಾಡಿ

ಎ) ಅಯಸ್ಕಾಂತದಲ್ಲಿ ಕಾಂತ ಸಾಮರ್ಥ್ಯ ಧ್ರುವಗಳಲ್ಲಿ ಅಧಿಕವಾಗಿರುತ್ತದೆ.

ಬಿ) ಅಯಸ್ಕಾಂತದಲ್ಲಿನ ಎರಡು ಧ್ರುವಗಳನ್ನು ಪ್ರತ್ಯೇಕಿಸಲಾಗುವುದಿಲ್ಲ

ಸಿ) ವಿಜಾತಿಯ ಧ್ರುವಗಳು ವಿಕರ್ಷಿಸುತ್ತವೆ, ಮತ್ತು ಸಜಾತಿಯ ಧ್ರುವಗಳು ಆಕರ್ಷಿಸುತ್ತವೆ.

ಡಿ) ಒಂದು ಕಾಂತದ ಎರಡು ಧ್ರುವಗಳ ಆಕರ್ಷಣ ಸಾಮರ್ಥ್ಯ ಸ್ವಲ್ಪ ವ್ಯತ್ಯಾಸವಿರುತ್ತದೆ

 

4 / 100

4. 6

ಈ ಹೇಳಿಕೆಗಳ ಸರಿಯಾದ ಕಾಲಾನುಕ್ರಮ ಆಯ್ಕೆ ಮಾಡಿ

ಎ) ಸಬರಮತಿ ಆಶ್ರಮದಿಂದ ದಂಡಿ ಸಮುದ್ರ ತೀರಕ್ಕೆ ನಡಿಗೆ

ಬಿ) ಲಾಹೋರ್ ಕಾಂಗ್ರೇಸ್ ಅಧಿವೇಶನ

ಸಿ) ಗಾಂಧೀಜಿ ಎರಡನೆಯ ದುಂಡು ಮೇಜು ಪರಿಷತ್ತಿನಲ್ಲಿ ಭಾಗವಹಿಸಿದ್ದು

ಡಿ) ಗಾಂಧೀ ಇರ್ವಿನ್ ಒಪ್ಪಂದ

ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತ ಆಯ್ಕೆ ಮಾಡಿ.

5 / 100

5. ಮಿಶ್ರ ಹಣದುಬ್ಬರವು ಯಾವುದರ ಪರಿಣಾಮದಿಂದ

ಉಂಟಾಗುತ್ತದೆ?

6 / 100

6. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಆಯ್ಕೆ ಮಾಡಿ
1. ದ್ರೋಣಾಚಾರ್ಯ ಪ್ರಶಸ್ತಿಯ ಮೊತ್ತ( ಅತ್ಯುತ್ತಮ ತರಬೇತಿ ವಿಭಾಗದಲ್ಲಿ ನಿಯಮಿತ ಸಾಧನೆ ) 10 ಲಕ್ಷ ರೂ.
2. ದ್ರೋಣಾಚಾರ್ಯ ಪ್ರಶಸ್ತಿಯ ಮೊತ್ತ( ಅತ್ಯುತ್ತಮ ತರಬೇತಿ ವಿಭಾಗದಲ್ಲಿ ನಿಯಮಿತ ಸಾಧನೆ ) 15ಲಕ್ಷ ರೂ.
3. 2024ನೇ ಸಾಲಿನ ದ್ರೋಣಾಚಾರ್ಯ ಪ್ರಶಸ್ತಿಯನ್ನು ದೀಪಾಲಿ ದೇಶಪಾಂಡೆ ಅವರು ಪಡೆದುಕೊಂಡಿದ್ದಾರೆ
4. 24ನೇ ಸಾಲಿನ ದ್ರೋಣಾಚಾರ್ಯ ಪ್ರಶಸ್ತಿ ಕಳೆದುಕೊಂಡವರ ಸಂಖ್ಯೆ 2

7 / 100

7. ಸಮರ್ಥನೆ (ಎ) : ಮನೆಯ ಆದಾಯವು ಮೂಲಭೂತ ಅಗತ್ಯಗಳನ್ನು ಪೂರೈಸಲು ವಿಫಲವಾದಾಗ ನಿರಪೇಕ್ಷ ಬಡತನ ಎಂದು ಕರೆಯಲಾಗುತ್ತದೆ.

ಕಾರಣ (ಆರ್) : ಕಡಿಮೆ ಆದಾಯ ಹೊಂದಿರುವವರು ಹೆಚ್ಚಿನ ಆದಾಯ ಹೊಂದಿರುವವರಿಗಿಂತ ತುಲನಾತ್ಮಕವಾಗಿ ಬಡವರು.

ಉತ್ತರ ಸಂಕೇತಗಳು :

8 / 100

8. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದದ್ದನ್ನ ಆಯ್ಕೆ ಮಾಡಿ
1. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರಾಗಿ ನ್ಯಾಯಮೂರ್ತಿ ವಿ ರಾಮ ಸುಬ್ರಮಣಿಯನ್ ನೇಮಕವಾಗಿದ್ದಾರೆ
2. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನು ಪ್ರಧಾನಮಂತ್ರಿಯವರು ನೇಮಿಸುತ್ತಾರೆ
3. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನಿರ್ಗಮಿತ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ
4. ರಾಮಸುಬ್ರಮಣಿಯನ್ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ರಾಗಿ ಮುಂದಿನಅಐದು ವರ್ಷ ಗಳವರೆಗೆ ಅಧಿಕಾರದಲ್ಲಿ ಇರುತ್ತಾರೆ

9 / 100

9. 10. ನಾಲ್ಕನೇ ಬೌದ್ಧ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?

 

 

 

10 / 100

10. ಭಾರತದಲ್ಲಿ ಮುನ್ನೆಚ್ಚರಿಕೆ ಬಂಧನ ಕಾನೂನಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿದೆ?

1. ಮುನ್ನೆಚ್ಚರಿಕೆ ಬಂಧನವನ್ನು ಒದಗಿಸುವ ಯಾವುದೇ ಕಾನೂನು ಒಬ್ಬ ವ್ಯಕ್ತಿಯನ್ನು ಮೂರು ತಿಂಗಳಿಗಿಂತ ಹೆಚ್ಚು ಅವಧಿಯವರಿಗೆ ಬಂಧಿಸಲು ಅಧಿಕಾರ ನೀಡುವುದಿಲ್ಲ.

2.ಸಂವಿಧಾನವು ಮುನ್ನೆಚ್ಚರಿಕೆ ಬಂಧನ ಕಾಯ್ದೆಗೆ ಸಂಬಂಧಿಸಿದ ಶಾಸನೀಯ ಅಧಿಕಾರವನ್ನು ಸಂಸತ್ತಿಗೆ ಮಾತ್ರ ನೀಡಿದೆ

3.ಬಂಧಿತನಿಗೆ ಮುನ್ನೆಚ್ಚರಿಕೆ ಬಂಧನದ ಆಜ್ಞೆಯ ವಿರುದ್ಧ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಲಾಗಿದೆ

 

11 / 100

11. ಈ ಕೆಳಗಿನ ಯಾವ ಶಾಸನವು ಸುದರ್ಶನ ಕೆರೆಯ ಇತಿಹಾಸವನ್ನು ಉಲ್ಲೇಖಿಸುತ್ತದೆ?

 

12 / 100

12. ರಾಷ್ಟ್ರಪತಿಗಳ ಕ್ಷಮಾದಾನ ಅಧಿಕಾರಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ತಪ್ಪಾಗಿವೆ?

ಎ) ರಾಷ್ಟ್ರಪತಿಗಳ ಕ್ಷಮಾದಾನ ಅಧಿಕಾರವನ್ನು ಐದು ವಿಧಗಳಾಗಿ ವರ್ಗೀಕರಿಸಲಾಗಿದೆ.

ಬಿ) ಕ್ಷಮಾದಾನ ಅಧಿಕಾರವೂ ರಾಷ್ಟ್ರಪತಿಗಳ ವಿವೇಚನಾ ಅಧಿಕಾರವಾಗಿದೆ.

ಸಿ) ರಾಷ್ಟ್ರಪತಿಗಳು ಮಾರ್ಷಲ್ ಕೋರ್ಟ್‌ಗಳು ನೀಡುವ ಶಿಕ್ಷೆಗೆ ಕ್ಷಮಾದಾನ ನೀಡುವ ಅಧಿಕಾರ ಹೊಂದಿಲ್ಲ

ಡಿ) ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸುವುದು ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿಲ್ಲ

13 / 100

13. ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ :

ಕ್ಯಾಲ್ಸಿಯಂ ಸಂಯುಕ್ತದ ಬಳಕೆಗಳು

1. ತ್ವರಿತ ಸುಣ್ಣ : ಒಣಗಿಸುವ ಏಜೆಂಟ್

2. ಭೀಚಿಂಗ್ ಪೌಡರ್ : ಸೋಂಕುನಿವಾರಕ

3. ಕ್ಯಾಲ್ಸಿಯಂ ಕಾರ್ಬೈಡ್ : ಕೀಟನಾಶಕ

4. ಕ್ಯಾಲ್ಸಿಯಂ ಫಾಸ್ಟೇಟ್ : ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುವುದು

 

14 / 100

14. ಮೂರು ವಿಭಿನ್ನ ವೃತ್ತಗಳಲ್ಲಿ ವಾಹನ ದೀಪಗಳು 100 ಸೆಕೆಂಡು, 200 ಸಕೆಂಡು ಮತ್ತು 300 ಸೆಕೆಂಡುಗಳ ಅನಂತರ ಬದಲಾಗುತ್ತದೆ. ಇವು ಎಲ್ಲವೂ 3 : 20 am ನಲ್ಲಿ ಒಮ್ಮೆಗೇ ಬದಲಾದರೆ ಮತ್ತೆ ಇವೆಲ್ಲವೂ ಒಮ್ಮೆಗೇ ಬದಲಾಗುವುದು

15 / 100

15. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

ಎ) ಕೇಂದ್ರ ಪಟ್ಟಿಯಲ್ಲಿ 97 ವಿಷಯಗಳಿವೆ

ಬಿ) ರಾಜ್ಯಪಟ್ಟಿಯಲ್ಲಿ 59 ವಿಷಯಗಳಿವೆ

ಸಿ) ಸಮವರ್ತಿಪಟ್ಟಿಯಲ್ಲಿ 52 ವಿಷಯಗಳಿವೆ

ಆಯ್ಕೆಗಳು :

16 / 100

16. ಭಾರತದಲ್ಲಿ ಏಕೈಕ ಮನುಷ್ಯಕಾರದ ವಾನರನು.

17 / 100

17. 4ಯಾವುದು ಸರಿಯಾಗಿ ಹೊಂದಿಕೆಯಾಗಿಲ್ಲ

 

18 / 100

18. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದದ್ದನ್ನ ಆಯ್ಕೆ ಮಾಡಿ
1. ಕ್ಯಾನ್ಸರ್ ರೋಗಕ್ಕೆ ಹೊಸ ಲಸಿಕೆಯನ್ನು ರಷ್ಯಾ ದೇಶವು ಅನ್ವೇಷಿಸಿದೆ
2. ಇಸ್ರೋ ವಿಜ್ಞಾನಿಗಳಿಂದ ಕಪ್ಪು ಧೂಮಕೇತುಗಳನ್ನು ಸಂಶೋಧಿಸಲಾಗಿದೆ
3. ಶ್ರೀಲಂಕಾ ಮತ್ತು ಭಾರತದ ನೌಕಾ ಸಮರಭ್ಯಾಸ ಕ್ಲಿನಿಕ್ಸ್
4. ಭಾರತ ಮಲೇಶಿಯಾ ಜಂಟಿ ಮಿಲಿಟರಿ ವ್ಯಾಯಾಮ ಹರಿಮೌಶಕ್ತಿ

19 / 100

19. ಸಾರ್ವಜನಿಕ ಹಣಕಾಸು ಕುರಿತು ಈ ಕೆಳಗಿನ ಹೇಳಿಕೆಯನ್ನು ಪರಿಗಣಿಸಿ ಮತ್ತು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.

 

20 / 100

20. ಬೆಂಗಾಲ್ ಟೆನೆನ್ಸಿ ಕಾಯಿದೆ ಜಾರಿಗೊಳಿಸಿದ ಬ್ರಿಟಿಷ್ ಗವರ್ನರ್ ಜನರಲ್ ಯಾರು?

 

21 / 100

21. ಕೆ ಳಗಿನ ಹೇಳಿಕೆಗಳಲ್ಲಿ ಸರಿಯಾದ ಅವುಗಳನ್ನು ಗುರುತಿಸಿ
1. ನಾಗಾಲ್ಯಾಂಡ್ ರಾಜ್ಯ ಸರ್ಕಾರವು ಹಾರ್ನ್ ಬಿಲ್ ಹಬ್ಬವನ್ನು ಡಿಸೆಂಬರ್ 1ರಿಂದ 10ರವರೆಗೆ ಆಯೋಜಿಸಿತ್ತು
2. ಹಾರ್ನ್ ಬಿಲ್ ಹಬ್ಬವನ್ನು ಉತ್ಸವಗಳ ಹಬ್ಬ ಎಂದು ನಾಗಲ್ಯಾಂಡಲ್ಲಿ ಕರೆಯಲಾಗುತ್ತದೆ
3. ಹಾರ್ನ್ ಬಿಲ್ ಪಕ್ಷಿಯು ಐ ಯು ಸಿ ಎನ್ ಪಟ್ಟಿಯಲ್ಲಿ ಕ್ರಿಟಿಕಲಿ ಎಂಡೇನ್ಡ್ ಸ್ಪೀಸೀಸ್ ಆಗಿದೆ
4. ಹಾರ್ನ್ ಬಿಲ್ ಪಕ್ಷಿಯು ನಾಗಾಲ್ಯಾಂಡ್ ರಾಜ್ಯದ ರಾಜ್ಯ ಪಕ್ಷಿಯಾಗಿದೆ

22 / 100

22. . ಗ್ರಾಮೀಣ ಬಡಮಹಿಳೆಯರನ್ನು ಸಂಘಟಿಸಲು ಮತ್ತು ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲು ಈ ಕೆಳಕಂಡವುಗಳಲ್ಲಿ ಯಾವುದನ್ನು ಅಸ್ತಿತ್ವಕ್ಕೆ ತರಲಾಗಿದೆ?

23 / 100

23. .

ಈ ಕೆಳಗಿನ ಘಟನೆಗಳನ್ನು ಪರಿಗಣಿಸಿ

1. ರಾಮಕೃಷ್ಣ ಮಿಷನ್ ಸ್ಥಾಪನೆ

2. ಆರ್ಯ ಸಮಾಜದ

3. ಬ್ರಹ್ಮ ಸಮಾಜದ ಸ್ಥಾಪನೆ

4. ಪರಮಹಂಸ ಮಂಡಳಿ ಸ್ಥಾಪನೆ

ಈ ಕೆಳಗಿನವುಗಳಲ್ಲಿ ಯಾವುದು ಮೇಲಿನವುಗಳ ಸರಿಯಾದ ಕಾಲಾನುಕ್ರಮವಾಗಿದೆ?

24 / 100

24. ಸಾರ್ವಭೌಮ ಹಸಿರು ಬಾಂಡ್ ಗಳ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :

ಎ) ಸಾರ್ವಭೌಮ ಹಸಿರು ಬಾಂಡ್‌ಗಳು ಆರ್. ಬಿ. ಐ ನೀಡುವ ಬಾಂಡ್ ಗಳಾಗಿವೆ.

ಬಿ) ಮೊದಲ SGrB ಗಳನ್ನು ಜನವರಿ 2023 ರಲ್ಲಿ ನೀಡಲಾಯಿತು.

ಸಿ) ಇದು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮತ್ತು ಹಸಿರು ಮೂಲಸೌಕರ್ಯವನ್ನು ಬೆಂಬಲಿಸುವ ಯೋಜನೆಗಳಿಗೆ ಧನಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ

25 / 100

25. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದದ್ದನ್ನ ಆಯ್ಕೆ ಮಾಡಿ
1. ಡಿಸೆಂಬರ್ 2 ಅನ್ನ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನಾಗಿ ಆಚರಿಸಲಾಗುತ್ತದೆ
2. ಡಿಸೆಂಬರ್ 2 ಅನ್ನ ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನವನ್ನಾಗಿ ಆಚರಿಸಲಾಗುತ್ತದೆ
3. ಡಿಸೆಂಬರ್ 2 ಅನ್ನ ಅಂತರಾಷ್ಟ್ರೀಯ ಗುಲಾಮಗಿರಿ ನಿರ್ಮೂಲನ ದಿನವನ್ನಾಗಿ ಆಚರಿಸಲಾಗುತ್ತದೆ
4. ಡಿಸೆಂಬರ್ 22 ರನ್ನ ವಿಶ್ವ ಗಣಿತ ದಿನವನ್ನಾಗಿ ಆಚರಿಸಲಾಗುತ್ತದೆ

26 / 100

26. ತೊಂಬತ್ತೆರಡನೇ ಸಂವಿಧಾನ ತಿದ್ದುಪಡಿ, 2003 ರ ಮೂಲಕ ಸಂವಿಧಾನದ ಎಂಟನೇ ಅನುಸೂಚಿಗೆ ಈ ಕೆಳಗಿನ ಯಾವ ಭಾಷೆಗಳನ್ನು ಸೇರ್ಪಡೆ ಮಾಡಲಾಯಿತು?

 

27 / 100

27. .

ಈ ಕೆಳಗಿನ ಯಾವ ವಿಧಾನಗಳಲ್ಲಿ ಉಪರಾಷ್ಟ್ರಧ್ಯಕ್ಷರನ್ನು ತೆಗೆದುಹಾಕಬಹುದು?

 

28 / 100

28. ಸಾಮಾನ್ಯವಾಗಿ ಉಪಯೋಗಿಸಲ್ಪಡುವ ಚೆಲುವೆಕಾರಿ ಯಾವುದು?

 

29 / 100

29. ಸಂವಿಧಾನದ (73 ನೇ ತಿದ್ದುಪಡಿ) ಅಧಿನಿಯಮ, 1992 ರಲ್ಲಿರುವ ಅಂಶಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ವಿತರಣೆಗಳು ಸರಿಯಾಗಿವೆ?

ಎ) ಗ್ರಾಮ ಮಧ್ಯಂತರ ಮತ್ತು ಜಿಲ್ಲಾ ಮಟ್ಟಗಳಲ್ಲಿ ಪಂಚಾಯಿತಿಯ ಮೂರು ಹಂತಗಳಿರತಕ್ಕದು.

ಬಿ) ಪ್ರತಿಯೊಂದು ಹಂತದ ಪಂಚಾಯಿತಿ ಸ್ಥಾನಗಳನ್ನು ಈ ಉದ್ದೇಶಕ್ಕಾಗಿಯೇ ಗುರುತು ಮಾಡಲಾಗಿರುವ ಪ್ರಾದೇಶಿಕ ಮತ ಕ್ಷೇತ್ರಗಳಿಂದ ನಾಮ ನಿರ್ದೇಶನದ ಮೂಲಕವಾಗಿಯೇ ತುಂಬತಕ್ಕದ್ದು.

ಸಿ) ಪಂಚಾಯತಿಯ ಅಧಿಕಾರಾವಧಿಯು

5 ವರ್ಷಗಳಾಗಿರತಕ್ಕದ್ದು.

ಆಯ್ಕೆಗಳು :

30 / 100

30. ತಾಮ್ರದ ಪರಮಾಣು ಸಂಖ್ಯೆ ಎಷ್ಟು?

31 / 100

31. ಸರಿಯಾದದ್ದನ್ನು ಆಯ್ಕೆ ಮಾಡಿ
1. ಡಿಸೆಂಬರ್ 12 ಅನ್ನು ಭಾರತ ಭಾಷಾ ದಿನ ಎಂದು ಆಚರಿಸಲಾಗುತ್ತಿದೆ
2. ಭಾರತ ಭಾಷಾ ದಿನದ ಪ್ರಯುಕ್ತ ಕರ್ನಾಟಕ ಹೈಕೋರ್ಟ್ ವಿ ಭಾಗಿಯ ಪೀಠವು ಕನ್ನಡದಲ್ಲಿ ತೀರ್ಪು ನೀಡಿತು
3. 2008ರಲ್ಲಿ ಕನ್ನಡದಲ್ಲಿ ನ್ಯಾಯ ಮೂರ್ತಿ ಅರಳಿ ನಾಗರಾಜ್ ಮೊದಲ ಬಾರಿಗೆ ಕನ್ನಡದಲ್ಲಿ ತೀರ್ಪು ನೀಡಿದ್ದರು

32 / 100

32. ಮಹಾಜನಪದಗಳು ಮತ್ತು ಅವುಗಳ ರಾಜಧಾನಿಗಳನ್ನು ಕೆಳಗೆ ನೀಡಲಾಗಿದೆ

ಎ) ಕಂಬೋಜ : ರಾಜ್ ಪುರ

ಸಿ) ಕೋಸಲ : ಶ್ರಾವಸ್ತ್ರೀ

ಬಿ) ಅಂಗ : ಚಂಪಾ

 

 

ಡಿ) ಸುರಸೇನಾ : ಮಥುರಾ

ಆಯ್ಕೆಗಳು :

33 / 100

33. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ

ಎ) ಲಾಡಿಹುಳು ಒಂದು ಹಾರ್ಮಾಫೊಡೈಟ್

ಬಿ) ದುಂಡು ಹುಳುವಿಗೆ ಪ್ರತ್ಯೇಕ ಲಿಂಗಗಳಿರುತ್ತವೆ.

ಸಿ) ಫೈಲೇರಿಯಾವು ನೆಮಾಟೋಡನಿಂದಾಗುತ್ತದೆ.

ಡಿ) ಗಿನಿಯಾ ಹುಳು ಒಂದು ಅನೆಲಿಡ

ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳು

34 / 100

34. ಈ ಕೆಳಗಿನ ದಿವಾನರಲ್ಲಿ ಯಾರ ಕಾಲದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯನ್ನು 1906 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು?

35 / 100

35. ರಾಜ್ಯಲೋಕ ಸೇವಾ ಆಯೋಗದ ಬಗ್ಗೆ ಯಾವುದು ಸರಿಯಲ್ಲ?

ಎ) ರಾಜ್ಯ ಸೇವೆಗಳಿಗೆ ಅಭ್ಯರ್ಥಿಗಳ ನೇಮಕಾತಿ ಮಾಡುವುದು

ಬಿ) ಇದರ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ರಾಷ್ಟ್ರಾಧ್ಯಕ್ಷರು ನೇಮಕ ಮಾಡುತ್ತಾರೆ

ಸಿ) ಅಖಿಲ ಭಾರತ ಸೇವೆಯ ಅಧಿಕಾರಿಗಳ ಪ್ರಕರಣಗಳ ಬಗ್ಗೆ ಸಲಹೆಗಳನ್ನು ನೀಡುತ್ತದೆ

ಡಿ) ರಾಜ್ಯ ಸೇವೆಗಳಿಗೆ ನೇಮಕಾತಿ ವಿಧಾನದಲ್ಲಿ ರಾಜ್ಯಗಳಿಗೆ ಸಲಹೆಗಳನ್ನು ನೀಡುತ್ತದೆ

ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರವನ್ನು ಆರಿಸಿ

36 / 100

36. .ಕೆಳಗಿನ ಎಷ್ಟು ಹೇಳಿಕೆಗಳು ಸರಿಯಾಗಿವೆ
1. 2024ನೇ ಸಾಲಿನ ಅರ್ಜುನ ಪ್ರಶಸ್ತಿಗೆ 32 ಕ್ರೀಡಾ ಸಾಧಕರನ್ನು ಆಯ್ಕೆ ಮಾಡಲಾಗಿದೆ
2. ಜೀವಮಾನ ವಿಭಾಗದ ಅರ್ಜುನ ಪ್ರಶಸ್ತಿಗೆ ಸುಚ್ಚಾ ಸಿಂಗ್ ಸಿಂಗ್ ಮತ್ತು ಮುರಳಿಕಾಂತ್ ಪಾಟೀಕೆರ್ ಆಯ್ಕೆಯಾಗಿದ್ದಾರೆ
3. ಅರ್ಜುನ ಪ್ರಶಸ್ತಿ ಪಡೆದ ಸಜನ್ ಪ್ರಕಾಶ್ ಈಜು ಕ್ರೀಡಾಪಟುವಾಗಿದ್ದಾರೆ
4. ಅರ್ಜುನ ಪ್ರಶಸ್ತಿ ಪಡೆದ ನೀತು ಮತ್ತು ಸವಿಟಿ ಬಾಕ್ಸಿಂಗ್ ಕ್ರೀಡಾಪಟುಗಳಾಗಿದ್ದಾರೆ

37 / 100

37. .

ಭಾರತದ ಅಟಾರ್ನಿ ಜನರಲ್ ಗೆ ಸಂಬಂಧಿಸಿದ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

ಎ) ರಾಷ್ಟ್ರಪತಿಯು ಭಾರತದ ಅಟಾರ್ನಿ ಜನರಲ್ ರವರನ್ನು ನೇಮಕ ಮಾಡತಕ್ಕದ್ದು.

ಬಿ) ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರ ನೇಮಕಾತಿಯ ಅರ್ಹತೆಯನ್ನು ಅವರು ಹೊಂದಿರಬೇಕು

ಸಿ) ಭಾರತದ ರಾಷ್ಟ್ರಪತಿಯ ಇಷ್ಟ ಪರ್ಯಂತ ಅವರು ಪದವನ್ನು ಹೊಂದಿರುವುದಿಲ್ಲ.

ಡಿ) ಸಂಸತ್ತಿನ ಯಾವುದಾದರೂ ಒಂದು ಮನೆಯಲ್ಲಿ ಮಾತನಾಡುವ ಹಕ್ಕು ಅವರಿಗೆ ಇರುತ್ತದೆ.

ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.

38 / 100

38. ಈ ಕೆಳಗಿನವರುಗಳಲ್ಲಿ ಯಾರು ಋಗ್ವದದ ಪ್ರಮುಖ ದೇವತೆಗಳಾಗಿದ್ದಾರೆ?

1. ಇಂದ್ರ

2. ಪ್ರಜಾಪತಿ

3.ಅಗ್ನಿ

4.ಉಷಾ

39 / 100

39. ಒಂದು ಬಸ್ಸಿನ ವೇಗವು ಗಂಟೆಗೆ 72 ಕಿ. ಮೀ ಆದರೆ ಆ ಬಸ್ಸು 5 ಸೆಕೆಂಡಿನಲ್ಲಿ ಎಷ್ಟು ದೂರ ಕ್ರಮಿಸುತ್ತದೆ?

 

40 / 100

40. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಆಯ್ಕೆಯನ್ನು

ಎ) ನಿರೀಕ್ಷಿತ ಜೀವಿತಾವಧಿ ದರ : ಹುಟ್ಟಿದ ಪ್ರತಿಯೊಂದು ಮಗು ಬದುಕುಳಿಯಬಹುದಾದ ಅಂದಾಜು ವರ್ಷ

ಬಿ) ಶಿಶುಮರಣದರ ಪ್ರತಿ ಸಾವಿರ ಜನನದಲ್ಲಿ ಒಂದು ವರ್ಷದ ಒಳಗೆ ಮರಣಹೊಂದುವ ಶಿಶುಗಳ ಸರಾಸರಿ ಸಂಖ್ಯೆ

ಸಿ) ಮಕ್ಕಳ ಮರಣದರ : ಪ್ರತಿ ಸಾವಿರ ಜನನದಲ್ಲಿ ಒಂದು ವರ್ಷದ ಒಳಗೆ ಮರಣಹೊಂದವ ಮಕ್ಕಳ ಸರಾಸರಿ ಸಂಖ್ಯೆ

ಡಿ) ಮಾತೃ ಮರಣದರ : ಪ್ರತಿ ಒಂದು ಲಕ್ಷ ಜನನದಲ್ಲಿ ಮರಣ ಹೊಂದುವ ತಾಯಂದಿರ ಸರಾಸರಿ ಸಂಖ್ಯೆ

 

41 / 100

41. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ತನ್ನ ಗುರುತಿಸಿ
A. ಬೆಂಗಳೂರು ಸಂಚಾರ ಪೊಲೀಸ್ ಯೋಜನೆ ಅಸ್ತ್ರಂ ಆಗಿದೆ
B ಏಷ್ಯಾ ಲೀಡರ್ಶಿಪ್ 2024 ಸಮ್ಮೇಳನದಲ್ಲಿ ಮೂರು ಪ್ರಶಸ್ತಿಗಳನ್ನು ಅಸ್ತ್ರಂ ಯೋಜನೆ ಮೂಡಿಗೆರೆಸಿಕೊಂಡಿದೆ
C. ಅಸ್ತ್ರಂ ಯೋಜನೆಯ ಉದ್ದೇಶ ಬೆಂಗಳೂರು ನಗರದಲ್ಲಿ ಆಗುವ ಕಳ್ಳತನವನ್ನು ಹಾಗೂ ದರೋಡೆಗಳನ್ನು ನಿಯಂತ್ರಿಸಬಹುದು ಆಗಿತ್ತು

42 / 100

42. 1.

ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ

ಎ) ವಿಜಯನಗರ ಆಳ್ವಿಕೆಯಲ್ಲಿ ಜಮೀನ್ದಾರರು ಮತ್ತು ಗೇಣಿದಾರರ ನಡುವೆ ಇದ್ದ ಪಾಲುದಾರಿಕೆ ವ್ಯವಸ್ಥೆಯನ್ನು ರಾಯರೇಖಾ ಪದ್ಧತಿ ಎನ್ನುತ್ತಿದ್ದರು.

ಬಿ) ಭೂಮಿಯನ್ನು ವರ್ಗೀಕರಿಸಿ ಅದರ ಫಲವತ್ತತೆಯ ಆಧಾರದ ಮೇಲೆ ಕಂದಾಯವನ್ನು ನಿಗದಿಪಡಿಸುವ ವ್ಯವಸ್ಥೆಯನ್ನು ವರಂ ಎನ್ನಲಾಗುತ್ತಿತ್ತು.

43 / 100

43. ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದದನ್ನು ಆಯ್ಕೆ ಮಾಡಿ

1) ಅನ್ ಟು ದಿ ಲಾಸ್ಟ್ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಕೃತಿಯಾಗಿದೆ

2) ಗ್ರಾಮ ಸ್ವರಾಜ್ ಎಂಬುದು ಮಹಾತ್ಮಾ ಗಾಂಧೀಜಿಯವರ ಪರಿಕಲ್ಪನೆಯಾಗಿದೆ.

3) ಸರ್ವೋದಯ ಎಂಬ ಪದವನ್ನು ಗಾಂಧೀಜಿಯವರು ತಮ್ಮ ಕೃತಿಯಿಂದ ಆಯ್ದುಕೊಂಡಿದ್ದಾರೆ

4) ಗ್ರಾಮ ಸ್ವರಾಜ್ ಎಂದರೆ ಗ್ರಾಮಗಳಿಂದ ಸ್ವಾತಂತ್ರ ಹೋರಾಟ ಆರಂಭಿಸುವುದು

ಆಯ್ಕೆಗಳು:

44 / 100

44. ಕೆಳಗಿನ ಜೋಡಿಗಳನ್ನು ಪರಿಗಣಿಸಿ ಮತ್ತು ತಪ್ಪಾಗಿರುವುದನ್ನು

ಗುರುತಿಸಿ:

45 / 100

45. ಮುಂದಿನ ಹೇಳಿಕೆಗಳನ್ನು ಗಮನಿಸಿ :

ಎ) ಭಾರತದಲ್ಲಿ ಯೋಜನೆಗಳಿಗೆ ಸಂಬಂಧಿಸಿದಂತೆ ನಿರ್ಣಯ ತೆಗೆದುಕೊಳ್ಳುವ ಅತ್ಯುನ್ನತ ಸಮಿತಿಯೆಂದರೆ ಯೋಜನಾ ಆಯೋಗ

ಬಿ) ಭಾರತೀಯ ಯೋಜನಾ ಆಯೋಗದ ಕಾರ್ಯದರ್ಶಿಯವರೇ ರಾಷ್ಟ್ರೀಯ ವಿಕಾಸ ಪರಿಷತ್ ಗೂ ಕಾರ್ಯದರ್ಶಿಯಾಗಿರುತ್ತಾರೆ.

c.ಸಂವಿಧಾನದ 7 ಈ ಹೇಳಿಕೆಗಳಲ್ಲಿ ಯಾವುದು ಸರಿನೇ ಅನುಸೂಚಿಯಲ್ಲಿರುವ ಸಮವರ್ತಿ ಪಟ್ಟಿಯಲ್ಲಿ ಆರ್ಥಿಕ ಮತ್ತು ಸಾಮಾಜಿಕ ಯೋಜನೆಗಳನ್ನು ಸೇರಿಸಲಾಗಿದೆ.

ಈ ಹೇಳಿಕೆಗಳಲ್ಲಿ ಯಾವುದು ಸರಿ

46 / 100

46. ಈ ಕೆಳಗಿನವುಗಳಲ್ಲಿ ಯಾವುದು ಹಣದುಬ್ಬರದ ಸೂಕ್ತ ವಿವರಣೆಯಾಗಿದೆ.

 

47 / 100

47. ಮೈಕೋರೈಜಾ ಎಂಬುದು

48 / 100

48. ಅಮ್ಮಿಯೊಸೆಂಟಿಸಿಸ್ ಕೆಳಗಿನ ಯಾವುದರ ಪ್ರಯೋಗ

 

49 / 100

49. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದನ್ನು ಗುರುತಿಸಿ

 

50 / 100

50. ಬ್ಯಾಂಕಿನಲ್ಲಿ ದಿನಕ್ಕೆ ಎಷ್ಟು ಬಾರಿಯಾದರೂ ವ್ಯವಹರಿಸಬಹುದಾದ ಖಾತೆಗೆ ಏನೆನ್ನುವರು?

 

51 / 100

51. ಒಂದೇ ವೇಗದಲ್ಲಿ ಚಲಿಸುವ ಒಂದು ಮೋಟಾರ್ ಕಾರು 3 ತಾಸು 20 ನಿಮಿಷದಲ್ಲಿ 160 ಕಿ. ಮೀ ದೂರವನ್ನು ಕ್ರಮಿಸುತ್ತದೆ. 2.1/2 ತಾಸುಗಳಲ್ಲಿ ಅದು ಕ್ರಮಿಸುವ ದೂರವು

52 / 100

52. ಸರಿಯಾದವುಗಳನ್ನು ಗುರುತಿಸಿ

1) ಚಿತ್ರದುರ್ಗ ಜಿಲ್ಲೆಯ ಚಂದ್ರವಳ್ಳಿ ಶಾಸನದ ನಿರ್ಮಾಣಕಾರ 5 ನೇ ಮದಕರಿ ನಾಯಕ

2) ಇದು ಬ್ರಾಹ್ಮಲಿಪಿ ಸಂಸ್ಕೃತ ಭಾಷೆಯಲ್ಲಿದೆ

3) ಇದನ್ನು ಪ್ರೊ.ರಾಜಶೇಖರಪ್ಪ ಪತ್ತೆಹಚ್ಚಿದರು

ಆಯ್ಕೆಗಳು:-

 

53 / 100

53. ಕೊಡಗನ್ನು ಬ್ರಿಟಿಷ್ ಅಧಿಪತ್ಯಕ್ಕಡ ಸೇರ್ಪಡೆ ಮಾಡಿಕೊಂಡ ಬ್ರಿಟಿಷ್ ಗವರ್ನರ್ ಯಾರು?

54 / 100

54. ಗಾಮಾಕ್ಸಿನ್, DDT ಮತ್ತು ಬೀಚಿಂಗ್ ಪೌಡರ್ ಇವು ಯಾವುದರ ಸಂಯುಕ್ತಗಳು.

 

55 / 100

55. 125 ಮೀ ದೂರವನ್ನು ಗಂಟೆಗೆ 50 ಕಿ. ಮೀ ವೇಗದಲ್ಲಿ ಚಲಿಸುತ್ತಿರುವ ಕಾರು ತೆಗೆದುಕೊಳ್ಳುವ ಸಮಯ ಎಷ್ಟು?

56 / 100

56. 9

ಈ ಕೆಳಗಿನ ಮೊಘಲ್ ಚಕ್ರವರ್ತಿಗಳಲ್ಲಿ ಯಾರು ಅವರ ಮೇಲಿನ ಜೀವನ ಚರಿತ್ರೆಯನ್ನು ಸ್ವತಃ ಬರೆದು ಕೊಂಡಿದ್ದಾರೆ?

ಎ) ಬಾಬರ್

ಬಿ) ಹುಮಾಯನ್

ಸಿ) ಅಕ್ಟರ್

ಡಿ) ಜಹಾಂಗೀರ್

57 / 100

57. ಶಿಶು ಸಾಲ ಎಂದರೆ ಯಾವುವು?

58 / 100

58. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದನ್ನು ಆಯ್ಕೆ ಮಾಡಿ
1. 76ನೇ ಗಣರಾಜ್ಯೋತ್ಸವದ ಪರೇಡ್ಗೆ ಕರ್ನಾಟಕದಿಂದ ವಿರೂಪಾಕ್ಷ ದೇವಾಲಯ ಆಯ್ಕೆಯಾಗಿದೆ
2. 76ನೇ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಇಂಡೋನೇಷಿಯಾದ ಅಧ್ಯಕ್ಷ ಆಗಮಿಸುತ್ತಿದ್ದಾರೆ
3. ಗಣರಾಜ್ಯೋತ್ಸವದ ಮೊದಲ ಅತಿಥಿಯಾಗಿ 1950 ಜನವರಿ 26ರಲ್ಲಿ ಇಂಡೋನೇಷ್ಯಾದ ಅಧ್ಯಕ್ಷರು ಆಗಮಿಸಿದ್ದರು

59 / 100

59. 5.ಈ ಹೇಳಿಕೆಗಳ ಸರಿಯಾದ ಕಾಲಾನುಕ್ರಮ ಆಯ್ಕೆ ಮಾಡಿ

ಎ) ಸಬರಮತಿ ಆಶ್ರಮದಿಂದ ದಂಡಿ ಸಮುದ್ರ ತೀರಕ್ಕೆ ನಡಿಗೆ

ಬಿ) ಲಾಹೋರ್ ಕಾಂಗ್ರೇಸ್ ಅಧಿವೇಶನ

ಸಿ) ಗಾಂಧೀಜಿ ಎರಡನೆಯ ದುಂಡು ಮೇಜು ಪರಿಷತ್ತಿನಲ್ಲಿ ಭಾಗವಹಿಸಿದ್ದು

ಡಿ) ಗಾಂಧೀ ಇರ್ವಿನ್ ಒಪ್ಪಂದ

ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತ ಆಯ್ಕೆ ಮಾಡಿ.

60 / 100

60. ಪೌರತ್ವಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

 

61 / 100

61. ಭಾರತ್ ನಿರ್ಮಾಣ್ ಯೋಜನೆಯ ಉದ್ದೇಶವೇನು?

62 / 100

62. ಹರ್ಮುಜ್ ಜಲಸಂಧಿಯು ಈ ಕೆಳಗಿನ ಯಾವ ಸ್ಥಳದಲ್ಲಿದೆ?

 

63 / 100

63. 2.

ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ

ಎ) 6 ನೇ ವಿಕ್ರಮಾದಿತ್ಯನು ಚಾಲುಕ್ಯ ವಿಕ್ರಮ ಶಕೆಯನ್ನು ಪ್ರಾರಂಭಿಸಿದ ಬಗ್ಗೆ ಗದಗ ಶಾಸನವು ಮಾಹಿತಿಯನ್ನು ನೀಡುತ್ತದೆ.

ಬಿ) ಈತನ ಆಸ್ಥಾನ ಕವಿಯಾದ ಬಿಲ್ದಣನು ವಿಕ್ರಮಾಂಕೋದ್ಯೋದಯ ಎಂಬ ಕೃತಿಯನ್ನು ರಚಿಸಿದನು

 

64 / 100

64. ಗಾಮಾಕ್ಸಿನ್, DDT ಮತ್ತು ಬೀಚಿಂಗ್ ಪೌಡರ್ ಇವು ಯಾವುದರ ಸಂಯುಕ್ತಗಳು.

 

65 / 100

65. ಸಾಮಾನ್ಯವಾಗಿ ಉಪಯೋಗಿಸಲ್ಪಡುವ ಚೆಲುವೆಕಾರಿ ಯಾವುದು?

66 / 100

66. ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

67 / 100

67. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :

ಎ) ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು ಯೋಜನಾ ಆಯೋಗದ ಒಂದು ಅಂಗ.

ಬಿ) ಆರ್ಥಿಕ ಮತ್ತು ಸಾಮಾಜಿಕ ಯೋಜನೆಗಳನ್ನು ಭಾರತ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಸೇರಿಸಲಾಗಿದೆ.

ಸಿ) ಭಾರತದ ಸಂವಿಧಾನವು ಆರ್ಥಿಕಾಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದಂತೆ ಯೋಜನೆಗಳ ಸಿದ್ದತೆಯಲ್ಲಿ ಪಂಚಾಯಿತಿಗಳಿಗೆ ಕಾರ್ಯವನ್ನು ವಹಿಸಬೇಕು ಎಂದು ತಿಳಿಸುತ್ತದೆ.

ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳು ಯಾವುವು?

68 / 100

68. ತೃತೀಯ ವಲಯವನ್ನು ಸೇವಾ ವಲಯ ಎಂದೂ ಕರೆಯಲಾಗುತ್ತದೆ ಈ ವಲಯದಲ್ಲಿ ಕೆಳಕಂಡವುಗಳಲ್ಲಿ ಯಾವುದು ಕಂಡು ಬರುವುದಿಲ್ಲ?

 

69 / 100

69. ಸಿಲಿಕಾನ್’ ನ ಎಲೆಕ್ಟ್ರಾನಿಕ್ ವಿನ್ಯಾಸ?

70 / 100

70. ಹೊಸ ಅಖಿಲ ಭಾರತ ಸೇವೆಯನ್ನು ರಚಿಸುವಂತಹದು

ಎ) ಸಂವಿಧಾನದ 312 ನೇ ಕಾಲಂ ನ ನಿರ್ಣಯ

ಬಿ) ಕಾರ್ಯನಿರ್ವಾಹಕ ಆದೇಶ

ಸಿ) ಸಂವಿಧಾನದ ಕಾಯ್ದೆಯ ತಿದ್ದುಪಡಿ

ಡಿ) ಒಂದು ಶಾಸನ

ಆಯ್ಕೆಗಳು :

71 / 100

71. ಬ್ರಿಟಿಷ್ ಸರ್ಕಾರ ನೇಮಿಸಿದ ಈ ಕೆಳಗಿನ ಯಾವ ಸಮಿತಿಯು 6 ರಿಂದ 14 ವರ್ಷ ವಯಸ್ಸಿನ ಎಲ್ಲರಿಗೂ ಕಡ್ಡಾಯ ಹಾಗೂ ಉಚಿತ ಶಿಕ್ಷಣ ನೀಡಬೆಕು ಎಂಬ ಶಿಫಾರಸ್ಸು ನೀಡಿತು?

72 / 100

72. ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಗುರುತಿಸಿ
1.ಭಾರತದಲ್ಲಿ ಒಟ್ಟು 58 ಹುಲಿ ಸಂರಕ್ಷಿತ ತಾಣಗಳಿವೆ
2. ಇತ್ತೀಚೆಗೆ ಘೋಷಿಸಲಾದ ರಥಪಾಾನಿ ಅಭಯಾರಣ್ಯ ಹುಲಿ ಸಂರಕ್ಷಿತ ತಾಣ ಮಹಾರಾಷ್ಟ್ರದಲ್ಲಿ ಕಂಡು ಬರುತ್ತದೆ
3. ಇದಕ್ಕಿಂತ ಮೊದಲು ಛತ್ತೀಸ್ಗಡದ ಗುರುಪಾಸಿದಾಸ್ ಟೀ ಮೋರ್ ಪಿಂಗ್ಲಾ ಹುಲಿ ಸಂರಕ್ಷಿತ ತಾಣವನ್ನಾಗಿ ಘೋಷಿಸಲಾಗಿತ್ತು

73 / 100

73. ಈ ಕೆಳಗಿನ ಯಾವ ರೀತಿಯ ವಾಯುಗುಣವನ್ನು ಪ್ರಪಂಚದ ‘ಪಾರ್ಕ್ ಲ್ಯಾಂಡ್’ ಎಂದು ಕರೆಯುತ್ತಾರೆ?

 

74 / 100

74. . ಭಾರತೀಯ ಸಂವಿಧಾನದಲ್ಲಿ ‘ಕಾನೂನಿನ ನಿಯಮ’ ಪರಿಕಲ್ಪನೆಯನ್ನು ಯಾವ ಸಂವಿಧಾನದಿಂದ ತೆಗೆದುಕೊಳ್ಳಲಾಗಿದೆ

75 / 100

75. ಬ್ರಿಟಿಷ್ ಗವರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿ ಜಾರಿಗೆ ತಂದ ಸಹಾಯಕ ಸೈನ್ಯ ಪದ್ಧತಿಯ ಒಪ್ಪಂದಕ್ಕೆ ಸಹಿ ಮಾಡಿದ ಈ ಕೆಳಗಿನವರನ್ನು ಕಾಲಾನುಕ್ರಮವಾಗಿ ಬರೆಯಿರಿ :

ಎ) ಮೂರನೇ ಕೃಷ್ಣರಾಜ ಒಡೆಯರ್

ಬಿ) ಕರ್ನಾಟಿಕ್ ನವಾಬ ಉಮತ್

ಸಿ) ತಂಜಾವೂರಿನ ರಾಜ ಸರ್ಪೋಜಿ

ಡಿ) ಬೆರಾರ್ ನ ಭೋಸೆ

ಇ) ಮರಾಠ ಪೇಳ್ವೆ ಎರಡನೇ ಬಾಜಿರಾವ್

76 / 100

76. ಭಾರತದ ಸರ್ವೋಚ್ಚ ನ್ಯಾಯಾಲಯವು ಈ ಕೆಳಗಿನ ಯಾವ ಪ್ರಕರಣದಲ್ಲಿ ತೀವ್ರ ಯಾತನೆಯಿಂದ ಬಳಲುತ್ತಿರುವ ಸಮುದಾಯಗಳಿಗೆ ಮೀಸಲಾತಿ ನೀಡಬಹುದು ಎಂಬ ತೀರ್ಪು ನೀಡಿತು?

77 / 100

77. ಅಮೀಬಾ ಮಲೇರಿಯಾ ಪರಾವಲಂಬಿ ಇವುಗಳಿಗೆ ಒಟ್ಟಾಗಿ ಏನೆನ್ನುತ್ತಾರೆ?

 

78 / 100

78. ಕೃಷಿ ಹಿಡುವಳಿಯ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಈ ಕೆಳಗಿನ

ಜೋಡಿಯನ್ನು ಪರಿಗಣಿಸಿ:

ಎ) ಅತಿ ಸಣ್ಣ ಹಿಡುವಳಿಗಳು – ಹೆಕ್ಟೇರ್ ಗಿಂತ ಕಡಿಮೆ

ಬಿ) ಸಣ್ಣ ಹಿಡುವಳಿಗಳು 1 ಹೆಕ್ಟೇರ್ ಗಿಂತ ಹೆಚ್ಚು ಮತ್ತು 3

ಹೆಕ್ಟೇರ್ ಗಿಂತ ಕಡಿಮೆ

ಸಿ) ಅರೆ ಮಧ್ಯಮ ಹಿಡುವಳಿಗಳು 3 ರಿಂದ 5 ಹೆಕ್ಟೇ‌ರ್

ಡಿ) ಮಧ್ಯಮ ಹಿಡುವಳಿಗಳು 4 ರಿಂದ 10 ಹೆಕ್ಟೇ‌ರ್

ಇ) ದೊಡ್ಡ ಪ್ರಮಾಣದ ಹಿಡುವಳಿಗಳು 10 ಹೆಕ್ಟೇರ್ ಗಿಂತ ಹೆಚ್ಚು

ಮೇಲಿನ ಜೋಡಿಗಳಲ್ಲಿ ಯಾವುದು ಸರಿಯಾಗಿದೆ?

79 / 100

79. ಕೆಳಗಿನವುಗಳಲ್ಲಿ ನಾಗರ ಶೈಲಿಯ ದೇವಾಲಯವನ್ನು ಗುರುತಿಸಿ.

 

80 / 100

80. 3

ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ

ಎ) ದುರ್ವಿನೀತನು ಪಲ್ಲವರ ಒಂದನೇ ಪರಮೇಶ್ವರ ವರ್ಮನನ್ನು ವಿಳ್ಳಿಂದೆ ಕದನದಲಿ ಸೋಲಿಸಿ ಉಕ್ರೋದಯ ಎಂಬ ಕಂಠಿಹಾರವನ್ನು ಗೆದ್ದನು.

ಬಿ) ಗಂಗರು ಜೈನ ಧರ್ಮದ ಪೋಷಕರಾಗಿದ್ದರೂ, ದುರ್ವಿನೀತನು ವೈಷ್ಣವ ಧರ್ಮದ ಮತಾವಲಂಬಿಯಾಗಿದ್ದನು

 

81 / 100

81. ಅಮೀರ್ ಖುಸ್ರೋಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ತಪ್ಪಾಗಿದೆ?

ಎ) ಈತನನ್ನು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಪಿತಾಮಹ ಎಂದು ಕರೆಯಲಾಗಿದೆ.

ಬಿ) ಈತನು ಭಾರತೀಯ ಸಂಗೀತ ಪದ್ಧತಿಗೆ ಪರ್ಷಿಯನ್ ಅರೇಬಿಕ್ ಮತ್ತು ಟರ್ಕಿಶ್ ಸಂಗೀತ ಶೈಲಿಗಳ ಅಂಶವನ್ನು ಅಳವಡಿಸಿದನು.

ಸಿ) ಈತನು ಖಯ್ಯಾಲ್ ಮತ್ತು ತರನಾ ರಾಗಗಳನ್ನು ಕಂಡುಹಿಡಿದಿದ್ದಾನೆ.

ಡಿ) ಇವನು “ಮಿಯಾನ್” ಎಂಬ ಬಿರುದು ಹೊಂದಿದ್ದನು.

ಉತ್ತರ ಸಂಕೇತಗಳು :

82 / 100

82. 8.

ಮಹಾಜನಪದಗಳು ಮತ್ತು ಅವುಗಳ ರಾಜಧಾನಿಗಳನ್ನು ಕೆಳಗೆ ನೀಡಲಾಗಿದೆ

ಎ) ಕಂಬೋಜ : ರಾಜ್ ಪುರ

ಬಿ) ಅಂಗ : ಚಂಪಾ

ಸಿ) ಕೋಸಲ : ಶ್ರಾವಸ್ತ್ರೀ

ಡಿ) ಸುರಸೇನಾ : ಮಥುರಾ

 

83 / 100

83. ಪರಮಾಣುವಿನ ಹೆಚ್ಚಿನ ದ್ರವ್ಯರಾಶಿ ನ್ಯೂಕ್ಲಿಯಸ್ ನಲ್ಲಿದೆ ಎಂದು ಯಾರು ಸೂಚಿಸಿದರು?

84 / 100

84. ಈ ಮುಂದಿನ ಯಾವ ಧಾತುಗಳ ಲವಣಗಳು ಪಟಾಕಿಗಳಲ್ಲಿ ಬಣ್ಣವನ್ನು ಒದಗಿಸುತ್ತದೆ?

85 / 100

85. ಎಷ್ಟು ಹೇಳಿಕೆಗಳು ಸರಿಯಾಗಿದೆ?

1. ಶಿರಾ ಕ್ಷೇತ್ರದ ಶಾಸಕ ಟಿಬಿ ಜಯಚಂದ್ರ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲಾಗಿದೆ
2. ಬಯೋಕಾನ್ ಮುಖ್ಯಸ್ತೇ ಕಿರಣ್ ಮಜಮ್ದಾರ್ ಶಾ ಅವರಿಗೆ ಜೇಮ್ ಶೆಡ್ಜಿ ಟಾಟಾ ಪ್ರಶಸ್ತಿ ನೀಡಲಾಗಿದೆ
3. ಪ್ರೊಫೆಸರ್ ಕೆ ವಿ ನಾರಾಯಣ ಅವರ ನುಡಿಗಳ ಅಳಿವು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ
4. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಒಂದು ಲಕ್ಷ ರೂ ನಗದು ಹೊಂದಿದೆ

86 / 100

86. ಪರಮಾಣುವಿನ ರಾಸಾಯನಿಕ ವರ್ತನೆಯು ಯಾವುದನ್ನು ಅವಲಂಭಿಸಿರುತ್ತದೆ?

 

87 / 100

87. ಕೇಂದ್ರ ಲೋಕಸೇವಾ ಆಯೋಗವನ್ನು ಕೆಳಗಿನದಕ್ಕೋಸ್ಕರ ಸಮಾಲೋಚನೆ ಮಾಡಲಾಗುವುದಿಲ್ಲ?

 

88 / 100

88. ರಾಬರ್ಟ ಡ್ರೈವ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ

1. ಅವರು ಬಂಗಾಳದಲ್ಲಿ ಕಂಪನಿಯ ರಾಜಕೀಯ ಅಧಿಕಾರಕ್ಕೆ ಅಡಿಪಾಯ ಹಾಕಿದರು.

2. ಅವನು ಬಂಗಾಳದಲ್ಲಿ ದ್ವಿ-ಸರ್ಕಾರದ ವ್ಯವಸ್ಥೆಯನ್ನು ಪರಿಚಯಿಸಿದನು.

3. ಕಂಪನಿಯ ಸೇವಕರನ್ನು ಖಾಸಗಿ ವ್ಯಾಪಾರದಲ್ಲಿ ತೊಡಗಿಸುವುದನ್ನು ನಿಷೇಧಿಸಿದನು.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

 

89 / 100

89. ಒಬ್ಬ ವ್ಯಕ್ತಿ ಒಂದು ನಿರ್ದಿಷ್ಟ ದೂರವನ್ನು ಕಾರಿನಲ್ಲಿ ಪ್ರತಿಗಂಟೆಗೆ 30 ಕಿ. ಮೀ ವೇಗದಲ್ಲಿ ಮತ್ತು ಹಿಂದಿರುಗಿ ಅದೇ ದೂರವನ್ನು ಸ್ಕೂಟರ್ ನಲ್ಲಿ ಗಂಟೆಗೆ 20 ಕಿ. ಮೀ ವೇಗದಲ್ಲಿ ಚಲಿಸಿದರೆ ಅವನ ಪೂರ್ಣ ಪ್ರಮಾಣದ ಸರಾಸರಿ ವೇಗ ಎಷ್ಟು?

 

90 / 100

90. ಭಾರತದ ಅಟಾರ್ನಿ ಜನರಲ್ ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ.

91 / 100

91. .

ಈ ಕೆಳಗಿನ ಹೇಳಿಕೆಯನ್ನು ಗಮನಿಸಿ.

ಎ) 1881 ರಲ್ಲಿ ಮಹಾರಾಣಿ ಬಾಲಕಿಯರ ಪ್ರೌಢಶಾಲೆಯನ್ನು ಮೈಸೂರಿನಲ್ಲಿ ತೆರೆದರು.

ಬಿ) 1882 ರಲ್ಲಿ ಬೆಂಗಳೂರು ಮತ್ತು ಮೈಸೂರು ರೈಲ್ವೆ ಮಾರ್ಗವವನ್ನು ನಿರ್ಮಿಸಲು ಸಾರ್ವಜನಿಕರಿಂದ 20 ಲಕ್ಷ ರೂ ಸಾಲ ಸಂಗ್ರಹಿಸಿದರು

ಸಿ) ಜಾನ್ ಟೇಲರ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು ಕೋಲಾರದ ಚಿನ್ನದ ಗಣಿಯನ್ನು ಅಗೆಯಲು ಗುತ್ತಿಗೆ ಕೊಟ್ಟರು.

ಈ ಮೇಲಿನ ಹೇಳಿಕೆಯು ಈ ಕೆಳಗಿನ ಯಾರಿಗೆ ಸಂಬಂಧಿಸಿದೆ.

 

92 / 100

92. ಮೈಸೂರು ಪ್ರಾಂತ್ಯದಲ್ಲಿ ಕಾಫಿ ಬೆಳೆಯು ಈ ಕೆಳಗಿನ ಯಾರ ಅವಧಿಯಲ್ಲಿ ಅತೀ ಹೆಚ್ಚು ಪ್ರೋತ್ಸಾಹಿಸಲ್ಪಟ್ಟಿತು.

93 / 100

93. ಈ ಕೆಳಗಿನವುಗಳಲ್ಲಿ ಯಾವುದು ಭಾರತೀಯ ಮಾನ್ಸೂನ್ ಗಳಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳಾಗಿಲ್ಲ?

 

94 / 100

94. ಪರಮಾಣುವಿನ ದ್ರವ್ಯರಾಶಿ ಸಂಖ್ಯೆಯು ಯಾವ ಸಂಖ್ಯೆಗೆ ಸಮವಾಗಿರುತ್ತದೆ?

 

95 / 100

95. ಕೆಳಗಿನ ಎಷ್ಟು ಹೇಳಿಕೆಗಳು ಸರಿಯಾಗಿದೆ
1. ಸಾಹಿತಿ ದೇವನೂರು ಮಹಾದೇವ ಅವರಿಗೆ ತಮಿಳುನಾಡು ಸರ್ಕಾರ ನೀಡುವ ವೈಕುಂ ಪ್ರಶಸ್ತಿ ನೀಡಲಾಗಿದೆ
2. ಪರಿಸರವಾದಿ ಗಾಡ್ಗಿಲ್ ಅವರಿಗೆ 2024ರ ಚಾಂಪಿಯನ್ ಆಫ್ ದಿ ಅರ್ಥ್ ಪ್ರಶಸ್ತಿ ನೀಡಲಾಗಿದೆ
3. ಡೊನಾಲ್ಡ್ ಟ್ರಂಪ್ ಅವರು ಅಮೆರಿಕಾದ 46ನೇ ಅಧ್ಯಕ್ಷರಾಗುತ್ತಾರೆ
4. ಬ್ರಿಟನ್ನಿನ ಪ್ರತಿಷ್ಠಿತ ಟರ್ನರ್ ಪ್ರಶಸ್ತಿಗೆ ಜಸ್ಲಿನ ಕೌರ್ ಆಯ್ಕೆಯಾಗಿದ್ದಾರೆ

96 / 100

96. ಒಂದೇ ವೇಗದಲ್ಲಿ ಚಲಿಸುವ ಮೋಟಾರ್ ಕಾರು 4 ತಾಸು 10 ನಿಮಿಷಗಳಲ್ಲಿ 120 ಕಿ. ಮೀ ದೂರವನ್ನು ಕ್ರಮಿಸುತ್ತದೆ. 2 ತಾಸು 30 ನಿಮಿಷಗಳಲ್ಲಿ ಅದು ಕ್ರಮಿಸುವ ದೂರವು

 

97 / 100

97. ಈ ಕೆಳಗಿನ ಯಾವ ಸಂಘಟನೆಯು “ಅಂತರಾಷ್ಟ್ರೀಯ ವ್ಯಾಪಾರದ ಕಾವಲುನಾಯಿ” ಯಾಗಿದೆ?

98 / 100

98. ಭಾರತದ ಪ್ರಮುಖ ಕಣಿವೆಮಾರ್ಗ ಮತ್ತು ಅವುಗಳ ವಿಶಿಷ್ಟತೆಗೆ ಸಂಬಂಧಿಸಿದಂತೆ ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ.

ಎ) ಚಾಂಗ್ ಲಾ ಇದು ಹಿಮಾಲಯ ಶ್ರೇಣಿಯ ಎತ್ತರದ ಪರ್ವತ ಮಾರ್ಗವಾಗಿದೆ.

ಬಿ) ಪಾಂಗ್ಲ ಪಾಸ್ – ಈ ಪಾಸ್ ಮ್ಯಾನ್ಮಾ‌ರ್ ಅನ್ನು ಅರುಣಾಚಲ ಪ್ರದೇಶದೊಂದಿಗೆ ಸಂಪರ್ಕಿಸುತ್ತದೆ.

ಸಿ) ದಿಪು ಪಾಸ್ – ಈ ಪಾಸ್ ಭಾರತ, ಚೀನಾ ಮತ್ತು ಮ್ಯಾನ್ಮಾರ್ ಟ್ರೈಪಾಯಿಂಟ್ ಗಡಿ ವಿವಾದಗಳ ಪ್ರದೇಶವನ್ನು ಒಳಗೊಂಡಿದೆ.

ಮೇಲಿನ ಜೋಡಿಗಳಲ್ಲಿ ಯಾವ ಜೋಡಿ ತಪ್ಪಾಗಿದೆ.

99 / 100

99. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದದ್ದನ್ನ ಆಯ್ಕೆ ಮಾಡಿ
1. ಯುನೆಸ್ಕೋ ಏಷ್ಯಾ ಪೆಸಿಫಿಕ್ ಪ್ರಶಸ್ತಿಗೆ ಭಾರತದ 5 ತಾಣಗಳು ಆಯ್ಕೆಯಾಗಿವೆ
2. ಈ ಪ್ರಶಸ್ತಿಗೆ ಆಯ್ಕೆಯಾದ ದೇವಾಲಯಗಳಲ್ಲಿ ತಮಿಳುನಾಡಿನ ಬೃಹದೇಶ್ವರ ದೇವಾಲಯ ಕೂಡ ಒಂದಾಗಿದೆ
3. ಈ ಪ್ರಶಸ್ತಿಗೆ ವಿಶ್ವದ ಎಂಟು ತಾಣಗಳನ್ನು ಆಯ್ಕೆ ಮಾಡಲಾಗಿತ್ತು
4. ಏಷ್ಯಾ ಪೆಸಿಫಿಕ್ ಪ್ರಶಸ್ತಿಗೆ ಐದು ವಿಭಾಗದಲ್ಲಿ ತಾಣಗಳನ್ನು ಆಯ್ಕೆ ಮಾಡಲಾಗುತ್ತದೆ

100 / 100

100.  

ಎ ಮತ್ತು ಬಿ ಇಬ್ಬರು ವ್ಯಕ್ತಿಗಳು ಒಂದು ನಿರ್ದಿಷ್ಟ ಸ್ಥಳದಿಂದ

ಕ್ರಮವಾಗಿ ಗಂಟೆಗೆ 8 ಕಿ. ಮೀ ಮತ್ತು 3 ಕಿ. ಮೀ ವೇಗದಲ್ಲಿ ವಿರುದ್ಧ ದಿಕ್ಕಿಗೆ ಚಲಿಸುತ್ತಾರೆ. ಇವರಿಬ್ಬರ ನಡುವಿನ ಅಂತರವು 132 ಕಿ. ಮೀ ಆಗಲು ಎಷ್ಟು ಕಾಲ ಬೇಕು?

Your score is

The average score is 11%

Facebook
Twitter
WhatsApp
Telegram

Leave a Reply

Your email address will not be published. Required fields are marked *